ದಾವಣಗೆರೆ, ನವೆಂಬರ್,:ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಪ್ರತೀ ತಿಂಗಳು ಹುಣ್ಣಿಮೆಯಂದು ನಡೆಯುತ್ತಿರುವ ಶ್ರೀ ಗಾಯತ್ರಿ ಉಪಾಸನೆ, ಸಾಮೂಹಿಕ ಪೂಜೆ
ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ಶೆಣೈ ತಿಳಿಸಿದ್ದಾರೆ.
ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದಲ್ಲಿ ಗೌರಿ ಹುಣ್ಣಿಮೆಯ ಸೇವಾಕರ್ತರಾದ ಭಾವನ್ನಾರಾಯಣ ಮತ್ತು ಕುಟುಂಬದವರು ಪೂರೈಸಿದ್ದು ಪರಿವಾರದ ಅಧ್ಯಕ್ಷರಾದ ಡಾ. ಸುಶೀಲಮ್ಮ, ಗೌರವ ಉಪಾಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಖಜಾಂಚಿ ಪುರುಷೋತ್ತಮ ಡಿ.ಪಟೇಲ್, ಉಪಾಧ್ಯಕ್ಷರಾದ ಡಾ|| ರಮೇಶ್ ಪಟೇಲ್, ಸಮಿತಿ ಸದಸ್ಯರಾದ ಆರ್.ಎಂ.ಸತೀಶ್, ಸತ್ಯನಾರಾಯಣ ರಾವ್, ಶ್ರೀಮತಿ ಶೈಲಾ ವಿಜಯ ಕುಮಾರ್ ಶೆಟ್ಟಿ ದಂಪತಿಗಳು, ವಿ.ಕೃಷ್ಣಮೂರ್ತಿ, ಶ್ರೀಮತಿ ಸುಮಾ ಏಕಾಂತಪ್ಪ, ವಿಠಲ್ ಮಹೇಂದ್ರಕರ್, ವಿಕ್ರಂ ಜೈನ್, ಶಿವಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.