ದಾವಣಗೆರೆ:. ಸಿದ್ದರಾಮಯ್ಯನವರು 16 ಬಾರಿ ರಾಜ್ಯದ ಹಣಕಾಸಿನ ಬಜೆಟ್ ಮಂಡಿಸಿ ದೇಶದಲ್ಲಿಯೇ ದಾಖಲೆ ನಿರ್ಮಿಸಿದವರು. ಕರ್ನಾಟಕದಲ್ಲಿ ಮೊದಲ ಸಲ 2013 ರಿಂದ 2018 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ದಕ್ಷ ಆಡಳಿತ ನೀಡಿ, 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವವರು. ಕನ್ನಡ ನಾಡು ಕಂಡ ಅಪ್ರತಿಮ ಅಹಿಂದ ನಾಯಕ. ಇವರು ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾಮಲ್ಲಿಕಾರ್ಜುನರವರು ಗೆಲ್ಲಿಸಿ, ಕಾಂಗ್ರೆಸ್ ಬಲಪಡಿಸಿ, ನನ್ನ ಕೈ ಬಲಪಡಿಸಿ ಎಂದು ಹೇಳಬಹುದಾಗಿತ್ತು. ಆದರೆ ಅವರು ನಾನು ಬೇಕಾ ವಿನಯಕುಮಾರ ಬೇಕಾ ಎಂದು ಕೇಳಿರುವುದು ವಿನಯಕುಮಾರ ನನ್ನ ಸರಿಸಮಾನ ಎಂದು ಹೇಳಿದಂತಾಗಿದೆ. ಇನ್ನು ಎಂ.ಎಲ್.ಎ, ಎಂ.ಪಿಯಾಗದ ವಿನಯಕುಮಾರ ಸಿದ್ದರಾಮಯ್ಯನವರ ಸರಿಸಮಾನವಾಗಿ ಹೋಲಿಕೆಯಾಗಿದ್ದು ಮಾತ್ರ ವಿನಯಕುಮಾರ ದಿ ಗ್ರೇಟ್, ಬಲೇ ವಿನಯಕುಮಾರ ಎಂದೆನಿಸಿದಂತಾಗಿದೆ. ಇದರಿಂದ ವಿನಯಕುಮಾರರವರ ವರ್ಚಸ್ಸು ಶಿಖರವೇರಿದೆ. ಸುಮಾರು ಇಪ್ಪತ್ತು ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಕಟ್ಟಾಳುಗಳಾಗಿ ಶಾಮನೂರು ಮನೆತನಕ್ಕೆ ದುಡಿದ ಕಾಂಗ್ರೆಸ್ ಕುರುಬ ಮುಖಂಡರು ಸಿದ್ದರಾಮಯ್ಯನವರಿಗೆ ಕೈ ಮುಗಿದು ತಮ್ಮ ಹೆಸರೇಳಿ ಪರಿಚಯ ಮಾಡಿಕೊಂಡವರು ಇದನ್ನು ಅರಿತು ಕೊಳ್ಳಬೇಕು. ನಾನು ಬೇಕಾ ವಿನಯಕುಮಾರ ಬೇಕಾ ಎಂದು ಸಿದ್ದರಾಮಯ್ಯನವರು ಕೇಳಿರುವುದರ ಅರ್ಥ ವಿನಯಕುಮಾರ ನನಗೆ ಸರಿಸಮಾನವಾದವನ್ನು. ಅವನನ್ನು ಕೈ ಬಿಡಬೇಡಿ ಎಂದು ಹೇಳಿದಂತೆ ಆಗುತ್ತದೆ. (ಬಿ ಎಂ ಸತೀಶ್ ಕೊಳೇನಹಳ್ಳಿ)