ಡಿ 19 ಚಿಕ್ಕರೂಗಿ ಗ್ರಾಮದಲ್ಲಿ ಯುವಮುಖಂಡ ನ್ಯಾಯವಾದಿ ಶ್ರೀಶೈಲ ಮುಳಜಿ ತೋಟದಲ್ಲಿ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ , ಧರ್ಮಕ್ಷೇತ್ರ ಕೂಡಲಸಂಗಮ ಇವರ ಸನ್ನಿಧಿಯಲ್ಲಿ ಎಳ್ಳು ಅಮಾವಾಸ್ಯೆ ಪ್ರಯುಕ್ತ
ರೈತರೊಂದಿಗೆ ಸಾಮೂಹಿಕ ಪ್ರಸಾದ ಗೋ ಪೂಜೆ ಹಾಗೂ ಬೆಳೆಗಳಿಗೆ ಚರಗ ಚೆಲ್ಲುವ ಕಾರ್ಯಕ್ರಮ ಯಾಶಸ್ವಿಯಾಗಿ ನಡೆಯಿತು.
ವಿಜಯಪುರ ಜಿಲ್ಲಾ ಅಧ್ಯಕ್ಷ ಬಿಎಂ ಪಾಟೀಲ, ದೇವರ ಹಿಪ್ಪರಗಿ ತಾಲ್ಲೂಕಿನ ಅಧ್ಯಕ್ಷ ಗುರುರಾಜ್ ಆಕಳವಾಡಿ, ವಕೀಲ ಸಂಘದ ಅಧ್ಯಕ್ಷ ಡಿಜಿ ಬಿರಾದಾರ್, ಕುಮಾರ್ ನಿಡೋಣಿ , ಪರಿಷತ್ ವಕೀಲರಾದ ಈರಣ್ಣ ಚಾಗಶೆಟ್ಟಿ, ಬಸವರಾಜ್ ಯಾದವಾಡ, ಚನ್ನಾಗೌಡ ವಕೀಲರು, ದೇವರ ಹಿಪ್ಪರಗಿ ತಾಲ್ಲೂಕಿನ ಯುವ ಮುಖಂಡರುಗಳಾದ ಕುಮಾರ್ ಜೋಗುರು,. ವಿರೇಶ್ ಕುದರಿ , ಸಾಹೇಬಗೌಡ ದಾನಗೌಡ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
ಮೂಲಜಿ ಮನೆತನದ ಹಿರಿಯ ಹನುಮಂತರಾಯ, ಭೀಮನಗೌಡ ಬಿರಾದಾರ್ ಹಾಗೂ ಕುಟುಂಬ ವರ್ಗದವರು ಅರ್ಥಪೂರ್ಣವಾಗಿ ಪ್ರಾಸದ ವ್ಯವಸ್ಥೆ ಮಾಡಿದ್ದರು.

