Monday, June 2, 2025
Homeಸ್ಮರಣೆಮೇ 1 ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕರಿಂದ ಬೃಹತ್ ಮೆರವಣಿಗೆ, ಬಹಿರಂಗ ಸಭೆ.

ಮೇ 1 ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕರಿಂದ ಬೃಹತ್ ಮೆರವಣಿಗೆ, ಬಹಿರಂಗ ಸಭೆ.

ದಾವಣಗೆರೆ – ಮೇ 1 ಎಐಟಿಯುಸಿ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಕಾರ್ಮಿಕರಿಂದ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ ನಡೆಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ಮತ್ತು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ ಹೆಚ್ ಜಿ ಉಮೇಶ್ ತಿಳಿಸಿದ್ದಾರೆ.
ಮೇ 1 ರಂದು ಬೆಳಿಗ್ಗೆ 11ಗಂಟೆಗೆ ದಾವಣಗೆರೆ ನಿಟುವಳ್ಳಿ ರಸ್ತೆಯಲ್ಲಿರುವ ಸುರೇಶ್, ಶೇಖರಪ್ಪ, ಪಂಪಾಪತಿ ಟ್ರಸ್ಟ್ ಕಾಂಪ್ಲೆಕ್ಸ್ ಬಳಿಯಿಂದ ಕಾರ್ಮಿಕರ ಬೃಹತ್ ಮೆರವಣಿಗೆ ಆರಂಭವಾಗಲಿದೆ.
ಕಾರ್ಮಿಕರ ಮೆರವಣಿಗೆಯು ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಜಯದೇವ ಸರ್ಕಲ್ ಬಳಿ ಆಗಮಿಸಿ ಮೆರವಣಿಗೆ ಮುಕ್ತಾಯಗೊಳಿಸಿ ನಂತರ ನಾಟ್ಯಾಚಾರ್ಯ ಕುಲಕರ್ಣಿ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಲಾಗುವುದು.
ಬಹಿರಂಗ ಸಭೆಯನ್ನು ಎಐಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಬಿ ಅಮ್ಜದ್ ರವರು ಉದ್ಘಾಟಿಸಿ ಮಾತನಾಡುವರು.
ಎಐಟಿಯುಸಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಕಾಂ ಕೆ ರಾಘವೇಂದ್ರ ನಾಯರಿ, ಮುಖಂಡರುಗಳಾದ ಹೆಚ್ ಕೆ ಕೊಟ್ರಪ್ಪ,ಎಸ್ ಎಸ್ ಮಲ್ಲಮ್ಮ, ಮಹಮದ್ ಬಾಷಾ,ವಿ ಲಕ್ಷ್ಮಣ,ಜಯಪ್ಪ ಸೇರಿದಂತೆ ಇತರರು ವೇದಿಕೆಯಲ್ಲಿರುವರು.
ಎಲ್ಲಾ ವರ್ಗದ ಕಾರ್ಮಿಕರು ಮಹಿಳೆಯರು ವಿದ್ಯಾರ್ಥಿ ಯುವಜನರು ಮೇ ಡೇ ಕಾರ್ಯಕ್ರಮದ ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಸಂಘಟನೆ ಪ್ರಕಟಣೆಯಲ್ಲಿ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments